ಆರೋಗ್ಯ ಮತ್ತು ಚೈತನ್ಯಕ್ಕಾಗಿ ಅವಿಯಾ 'ರಥಸಪ್ತಮಿ' ಸಂಭ್ರಮ: 108 ಸೂರ್ಯನಮಸ್ಕಾರಗಳ ಯಶಸ್ವಿ ಅಭಿಯಾನ
ದಾವಣಗೆರೆ 25,ಜನವರಿ,2026.
ರಥಸಪ್ತಮಿ ಪ್ರಯುಕ್ತ ಇಂದು
25-01-2026. ನಗರದ ಮಾತೃಛಾಯಾ ಚಿಲ್ಡ್ರನ್ಸ್ ಪಾರ್ಕ್ ನಲ್ಲಿ
ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಅಂಡ್ ಪಿಜಿ ಸೆಂಟರ್, ಅಷ್ಟಾಂಗ ವಿನ್ಯಾಸ ಇಂಟರ್ನ್ಯಾಷನಲ್ ಯೋಗ ಅಕಾಡೆಮಿ, ಮಾತೃಛಾಯಾ ಯೋಗ ಕೇಂದ್ರ ಮತ್ತು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಸಹಯೋಗದೊಂದಿಗೆ, ರಥಸಪ್ತಮಿ ಪ್ರಯುಕ್ತ ಆಯೋಜಿಸಲಾಗಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಮೂಡಿಬಂದಿತು.
ಈ ಒಂದು ವಿಶೇಷವಾದ ರಥಸಪ್ತಮಿ ಕಾರ್ಯಕ್ರಮದಲ್ಲಿ 108 ಸೂರ್ಯ ನಮಸ್ಕಾರಗಳ ಜೊತೆಗೆ ವಿವಿಧ ಮಂತ್ರಗಳ ಪಠಣ ನಡೆಯಿತು. ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಷ್ಟಾಂಗ ವಿನ್ಯಾಸ ಯೋಗ ಅಕಾಡೆಮಿ,ಗುರುಕುಲ ಯೋಗ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಾಗಿದ್ದ, ಆಯುಷ್ ಇಲಾಖೆಯ ದಾವಣಗೆರೆ ಜಿಲ್ಲಾ ಆಯುಷ್ ವೈದ್ಯ ಅಧಿಕಾರಿಗಳಾದ ಡಾ | ಯೋಗೇಂದ್ರ ಕುಮಾರ್ ರವರ ನಿರ್ದೇಶನದಂತೆ, ಅಶ್ವಿನಿ AMC & PC ಪ್ರಾಂಶುಪಾಲರಾದ ಡಾ. ಮುಕ್ತ ಹಿರೇಮಠ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ನೇತೃತ್ವವನ್ನು ಅಂತರಾಷ್ಟ್ರೀಯ ಯೋಗ ಶಿಕ್ಷಕರಾದ ಯೋಗಾಚಾರ್ಯ ವೈದ್ಯ|| ತೀರ್ಥರಾಜ್ ಹೆಚ್.ಸಿ. ಯೋಗಾಚಾರ್ಯ ವೈದ್ಯ|| ಅನಿಲ್ ಕುಮಾರ್. ಬಿ.ಆರ್ ಮತ್ತು ಡಾ. ಸುನಿಲ್ ಹರಪನಹಳ್ಳಿ ರವರು ವಹಿಸಿಕೊಂಡಿದ್ದರು. ಶ್ರೀಯುತ ಅರುಣ್ ಅಗಸನಕಟ್ಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಚಂದ್ರಪ್ಪ ಡಿ, ಉಮೇಶ್ವರಯ್ಯ,ಸುಮಾ ಹೆಚ್.ಟಿ. ಯೋಗ ಪ್ರತ್ಯಕ್ಷೈಕ ನಡೆಸಿಕೊಟ್ಟರು.
ಈ ಕಾರ್ಯಕ್ರಮವು ದಾವಣಗೆರೆಯ ಜನತೆಗೆ ಆರೋಗ್ಯ ಮತ್ತು ಚೈತನ್ಯದ ಸಂದೇಶವನ್ನು ಸಾರಿತು.
Comments
Post a Comment